ಕಾಶಿಬೆಟ್ಟು ಬಳಿ ಕಾರು ಪಲ್ಟಿ ಅಪಾಯದಿಂದ ಪಾರಾದ ಚಾಲಕ

 

 

 

ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಘಟನೆ     ಚಿಕ್ಕಮಗಳೂರು ಮಂಗಳೂರು   ರಾಷ್ಟ್ರೀಯ ಹೆದ್ದಾರಿಯ ಕಾಶಿಬೆಟ್ಟು  ಸಮೀಪ   ಬೆಳಿಗ್ಗೆ ನಡೆದಿದೆ.
ಮಂಗಳೂರಿನಿಂದ ಚಿಕ್ಕಮಗಳೂರಿಗೆ ತೆರಳುತಿದ್ದಾಗ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಕಾರು ಚಲಿಸಿ ಪಲ್ಟಿಯಾಗಿದೆ ರಸ್ತೆ ಬದಿಯ ಹುಲ್ಲು ಸ್ವಚ್ಛ ಗೊಳಿಸಿ ಮಣ್ಣು ಹಾಕಲಾಗಿದ್ದು ಮಳೆ ಬರುತ್ತಿರುವುದರಿಂದ ಮಣ್ಣಿನಲ್ಲಿ ಕಾರು ಜಾರಿಕೊಂಡು ಹೋಗಿ ಅವಘಡ ಸಂಭವಿಸಿರಬಹುದು ಎಂದು ತಿಳಿದು ಬಂದಿದೆ.

 

 

ಅಪಘಾತ ಸಂಭವಿಸಿದ ತಕ್ಷಣ ಕಾರಿನ ಹಿಂದೆ ಇದ್ದ ಸಂತೆಕಟ್ಟೆ ರಿಕ್ಷಾ ಚಾಲಕರೊಬ್ಬರು ಅವರನ್ನು ತನ್ನ ರಿಕ್ಷಾದಲ್ಲಿ ಉಜಿರೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.  ಕಾರಿನಲ್ಲಿ ಒಬ್ಬರೇ ಇದ್ದು   ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.

error: Content is protected !!