ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಡಾ. ಎಂ.ಪಿ.ಶ್ರೀನಾಥ್ ನಾಮಪತ್ರ ಸಲ್ಲಿಕೆ

ಉಜಿರೆ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಎ .5 ರಂದು ಚುನಾವಣಾಧಿಕಾರಿ , ಮಂಗಳೂರು ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ರಾದ ಶ್ರೀ ಗುರುಪ್ರಸಾದ್ ಇವರ ಮೂಲಕ ಉಜಿರೆಯ ಡಾ. ಎಂ ಪಿ ಶ್ರೀನಾಥ್ ಅವರು ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅವರ ಪತ್ನಿ ಶ್ರೀಮತಿ ಸುಮಾ ಶ್ರೀನಾಥ್, ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ‌ ವಿಜಯಲಕ್ಷ್ಮೀ ಶೆಟ್ಟಿ, ಮಂಗಳೂರಿನ ಸೂರಜ್ ಇಂಟರ್ ನ್ಯಾಶನಲ್ ಸ್ಕೂಲ್ ನ ಅಧ್ಯಕ್ಷ ಮಂಜುನಾಥ್ ರೇವಣ್ಕರ್,ಉಜಿರೆ ಶ್ರೀ ಧ ಮ ಎಜ್ಯುಕೇಶನಲ್ ಸೊಸೈಟಿಯ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಬಿ ಸೋಮಶೇಖರ ಶೆಟ್ಟಿ, ಬೆಳ್ತಂಗಡಿ ವಾಣಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ ಯದುಪತಿ ಗೌಡ , ಉಜಿರೆಯ ದಂತ ವೈದ್ಯ ಡಾ. ಎಂ ಎಂ ದಯಾಕರ್, ರಾಮಕೃಷ್ಣ ಭಟ್ ಬೆಳಾಲು , ಡಾ. ಬಿ.ಎ . ಕುಮಾರ ಹೆಗ್ಡೆ ,ಡಾ. ಶ್ರೀಧರ ಭಟ್,ಕಮಲಾಕ್ಷ ಆಚಾರ್ , ಡಾ.ಮಹೇಶ್ ಶೆಟ್ಟಿ, ಡಾ. ಸಂಪತ್ ಕುಮಾರ್, ನವೀನ ಕುಮಾರ್ ಮೊದಲಾದವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕನ್ನಡದ ಕಂಪು ಮನೆ ಮನೆಗಳಿಗೆ ಪಸರಿಸಬೇಕು. ಕನ್ನಡ ಸಾಹಿತ್ಯದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಹಾಗು ಕನ್ನಡ ಸಾಹಿತ್ಯದ ಬೆಳವಣಿಗೆಗೆ ಎಲ್ಲ ಪ್ರಯತ್ನಗಳನ್ನು ಮಾಡಲು ಎಲ್ಲರ ಸಹಕಾರ ಅಗತ್ಯವೆಂದು ಹೇಳಿದರು.

error: Content is protected !!